ಹಾಸನದ ಶಕ್ತಿ ದೇವತೆ ಹಾಸನಾಂಬೆ
HASANAMBA TEMPLE
ಭಾರತವು ದೇವಾಲಯಗಳ ನಾಡು. ಇಲ್ಲಿ ಲಕ್ಷಾಂತರ ದೇವಾಲಯಗಳಿದ್ದು ಪ್ರತಿಯೊಂದು ದೇವಾಲಯಗಳು ತನ್ನದೇ ಆದ ವಿಶೇಷ ಮಹತ್ವವನ್ನು ಒಳಗೊಂಡಿದೆ. ಅವುಗಳಲ್ಲಿ ಹಾಸನದ ಹಾಸನಾಂಬೆ ದೇವಾಲಯವು ಒಂದು. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯವು ತುಂಬಾ ವಿಶೇಷವಾದದ್ದು ಈ ದೇವಾಲಯವನ್ನು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಈ ದೇವಾಲಯವು ಭಕ್ತರಿಗೆ ದರ್ಶನಕ್ಕೆ ತೆರೆದಿರುತ್ತದೆ ಅತ್ಯಂತ ಹೆಚ್ಚು ಗುರುತಿಸಲ್ಪಟ್ಟ ಈ ದೇವಾಲಯಕ್ಕೆ ದೀಪಾವಳಿ ಸಮಯದಲ್ಲಿ ದೂರದೂರುಗಳಿಂದ ಅನೇಕ ಭಕ್ತರು ಬರುತ್ತಾರೆ.
ಹಾಸನಾಂಬೆ ದೇವಾಲಯದ ಇತಿಹಾಸ
ಪ್ರಸಿದ್ಧ ಹಾಸನಾಂಬೆ ದೇವಾಲಯವು ಬೆಂಗಳೂರಿನಿಂದ ಸುಮಾರು 184 ಕಿಲೋಮೀಟರ್ ದೂರದಲ್ಲಿದೆ ಈ ದೇವಾಲಯವು 12ನೇ ಶತಮಾನಕ್ಕೂ ಹಳೆಯ ದೇವಾಲಯವೆಂದು ಹೇಳಲಾಗುತ್ತದೆ. ಪಾಳೇಗಾರ ಕೃಷ್ಣಪ್ಪ ನಾಯಕ ಒಮ್ಮೆ ಕಾರ್ಯನಿಮಿತ್ತ ಪ್ರಯಾಣ ಹೊರಟಾಗ ಮಾರ್ಗ ಮಧ್ಯೆ ಮೊಲ ವೊಂದು ಅಡ್ಡ ಬಂದಿತು ಇದನ್ನು ಕೃಷ್ಣಪ್ಪನಾಯಕ ಅಪಶಕುನವೆಂದು ಭಾವಿಸುತ್ತಾನೆ .ಪ್ರತ್ಯಕ್ಷವಾದ ಆದಿಶಕ್ತಿ ಸ್ವರೂಪಿಣಿ ಈ ಸ್ಥಳದಲ್ಲಿ ದೇಗುಲಕಟ್ಟು ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ ಎಂದು ಹೇಳುತ್ತಾಳೆ. ಈ ಕಾರಣಕ್ಕಾಗಿ ಹಾಸನಾಂಬೆ ದೇವಾಲಯವನ್ನು ನಿರ್ಮಿಸಲಾಯಿತು.
ಹಾಸನಾಂಬೆ ದೇವಾಲಯದ ವಿಶೇಷತೆ
ಈ ದೇವಾಲಯದಲ್ಲಿ ಭಕ್ತರು ತಮ್ಮ ಕೋರಿಕೆಯನ್ನು ಪತ್ರದಲ್ಲಿ ಬರೆದು ಅದನ್ನು ದೇವರಿಗೆ ಅರ್ಜಿಯ ರೂಪದಲ್ಲಿ ಸಲ್ಲಿಸುತ್ತಾರೆ. ಇಲ್ಲಿ ಪತ್ರದ ರೂಪದಲ್ಲಿ ಅರ್ಜಿ ಸಲ್ಲಿಸಿದ ನಂತರ ಭಕ್ತರ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಈ ದೇವಾಲಯದಲ್ಲಿ ಅನೇಕ ಪವಾಡಗಳು ನಡೆಯುತ್ತವೆ. ದೇವಾಲಯದ ಬಾಗಿಲು ತೆರೆದಾಗ ಇಲ್ಲಿ ದೀಪಗಳು ಬೆಳಗುತ್ತಿರುತ್ತವೆ ಅದು ವರ್ಷವಿಡಿ ಬೆಳಗುತ್ತದೆ ಮುಂದಿನ ವರ್ಷ ದೇವಾಲಯದ ಗರ್ಭಗುಡಿಯನ್ನು ತೆರೆದಾಗ ಹಿಂದಿನ ವರ್ಷ ಬೆಳಗಿದ ದೀಪ ಉರಿಯುತ್ತಲೇ ಇರುತ್ತದೆ. ಇದರೊಂದಿಗೆ ದೇವರಿಗೆ ಅರ್ಪಿಸಿರುವ ಹೂವುಗಳುದೊರೆಯುತ್ತದೆ ತಾಜಾ ವಾಗಿಯೇ ಇರುತ್ತವೆ. ನೈವೇದ್ಯಕ್ಕೆ ಇಟ್ಟ ಅಕ್ಕಿಯು ಅನ್ನ ಆಗುವುದು ಕೂಡ ಇಲ್ಲಿನ ಚಮತ್ಕಾರ.
ಹಾಸನಾಂಬೆ ದೇವಾಲಯದ ಪೌರಾಣಿಕ ಹಿನ್ನೆಲೆ
ಅಂದಕಾಸುರನೆಂಬ ರಾಕ್ಷಸನು ತನ್ನ ಕಠೋರ ತಪಸ್ಸಿನ ನಂತರ ಬ್ರಹ್ಮನಿಂದ ಅದೃಶ್ಯನಾಗುವ ವರವನ್ನು ಪಡೆದುಕೊಂಡಿದ್ದನು. ವರದ ಹೆಮ್ಮೆಯಿಂದ ಅವನು ಬ್ರಹ್ಮಾಂಡಕ್ಕೆ ಚಿತ್ರ ಹಿಂಸೆಯನ್ನು ನೀಡಲು ಆರಂಭಿಸಿದ್ದನು. ಆ ರಾಕ್ಷಸನನ್ನು ಕೊನೆಗೊಳಿಸಲು ಶಿವನು ಅವನನ್ನು ಕೊಂದ ತಕ್ಷಣ ಅವನ ರಕ್ತದ ಪ್ರತಿ ಹನಿಯೂ ರಾಕ್ಷಸನಾಗಿ ಪರಿವರ್ತನೆಗೊಳ್ಳುತ್ತದೆ ಆಗ ಶಿವನು ತನ್ನ ಶಕ್ತಿಗಳಿಂದ ಯೋಗೀಶ್ವರಿ ದೇವಿಯನ್ನು ಸೃಷ್ಟಿಸಿದನು ಮತ್ತು ದೇವಿಯು ಆ ರಾಕ್ಷಸನನ್ನು ನಾಶಪಡಿಸಿದಳು. ಈ ದೇವಿಯನ್ನೇ ಹಾಸನಾಂಬೆ ಎಂದು ಇಲ್ಲಿ ಆರಾಧಿಸಲಾಗುತ್ತದೆ. ಈ ದೇವಾಲಯದ ಮುಖ್ಯ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ನೀವು ಭೇಟಿ ನೀಡಬೇಕೆಂದು ಬಯಸಿದರೆ ಬರೋಬ್ಬರಿ ಒಂದು ವರ್ಷಗಳ ಕಾಲ ಕಾಯಬೇಕು ಈ ದೇವಾಲಯದಲ್ಲಿ ಆದಿಶಕ್ತಿಯನ್ನೇ ಹಾಸನಾಂಬೆ ಎಂದು ಪೂಜಿಸಲಾಗುತ್ತದೆ. ಭಕ್ತರ ಸಂಕಷ್ಟಗಳನ್ನು ದೂರವಾಗಿಸುವ, ಇಷ್ಟಾರ್ಥಗಳನ್ನು ಈಡೇರಿಸುವ ಈ ತಾಯಿಯ ದರ್ಶನವನ್ನು ನೀವು ಮಾಡಲು ಪ್ರಯತ್ನಿಸಿ.
ದೀಪಾವಳಿ ಸಮಯದಲ್ಲಿ 12 ದಿನಗಳ ಕಾಲ ಭಕ್ತರಿಗೆ ದರ್ಶನ
ಕೃಷ್ಣಪ್ಪನಾಯಕನ ಕಾಲದಿಂದಲೂ ದೀಪಾವಳಿ ಸಮಯದಲ್ಲಿ ಹಾಸನಾಂಬೆ ದೇವಸ್ಥಾನ ತೆರೆಯುತ್ತದೆ .ಬಲಿಪಾಡ್ಯಮಿಯ ಮರುದಿನ ದೇವಾಲಯ ಮುಚ್ಚಿದರೆ ಮತ್ತೆ ತೆರೆಯುವುದು ಮುಂದಿನ ದೀಪಾವಳಿಗೆ .
ತಲುಪುವುದು ಹೇಗೆ
ರೈಲು ಮಾರ್ಗದ ಮೂಲಕ
ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.
ರಸ್ತೆ ಮಾರ್ಗದ ಮೂಲಕ
ಹಾಸನವು ಬೆಂಗಳೂರು ,ಮೈಸೂರು, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರಿನಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದ್ದು ಉತ್ತಮ ಬಸ್ಸಿನ ಸೌಲಭ್ಯವನ್ನು ಹೊಂದಿದೆ .
ಹತ್ತಿರದ ಸ್ಥಳಗಳು
ಬೇಲೂರು
ಹಳೇಬೀಡು
ರಾಮನಾಥಪುರ
ಸಕಲೇಶಪುರ
ಚಿಕ್ಕಮಗಳೂರು
ಗೊರೂರು
ಶ್ರವಣಬೆಳಗೊಳ
ಮಾವಿನಕೆರೆ ಬೆಟ್ಟ
ಹಳೇಬೀಡು
ರಾಮನಾಥಪುರ
ಸಕಲೇಶಪುರ
ಚಿಕ್ಕಮಗಳೂರು
ಗೊರೂರು
ಶ್ರವಣಬೆಳಗೊಳ
ಮಾವಿನಕೆರೆ ಬೆಟ್ಟ
LOCATION
ಹತ್ತಿರದ ಪ್ರವಾಸಿ ತಾಣಗಳು
Label List
Arakalagudu
(3)
Arasikere
(9)
Attigundi
(1)
Bangalore Police catch the thieves
(1)
Bangalore Robbery Case
(1)
Bank FD
(1)
Belur
(4)
Benefits of Baje
(1)
Benefits of walk after dinner
(1)
Best Food To Increase Hemoglobin Level
(1)
Bhagamandala
(1)
Bindiga
(1)
Bird Flu Symtoms
(1)
Budget friendly International places for Indians
(1)
Chamarajanagar
(5)
Channarayapatna
(1)
Chikmangalore
(16)
China Develops Longevity Pill
(1)
Coorg
(15)
Dakshina kannada
(1)
Devil kannada film
(1)
Drumstick Price Hike
(1)
Fake Nandini ghee sales network detected
(1)
Fake ORS Banned
(1)
Gundlupete
(2)
Hanuma Jayanthi
(1)
Hanur
(1)
Hassan
(27)
Hirekolale
(1)
Holenarasipura
(2)
Horror
(1)
Hosanagara
(2)
How to check the purity of ghee at home
(1)
How To Turn White Hair To Grey Hair Naturally
(1)
Jio New Offer
(1)
Jobs
(1)
K.R.Pete
(3)
Kadaba
(1)
Kadur
(1)
Kalasa
(2)
Keralians hair secret
(1)
kesavinamane
(1)
Kollegala
(1)
Koratagere
(1)
Krishnarajapete
(3)
Kushalnagar
(4)
Madikeri
(6)
Malavalli
(1)
Manchetevaru
(1)
Mandya
(27)
Medicine for diseases
(1)
Milk
(1)
Mysore
(21)
Nagamangala
(1)
Nagarahole
(1)
Nagenahalli
(2)
Nail Biting habit
(1)
National pollution control day
(1)
New Caller ID CNAP
(1)
Pandaravalli
(1)
Pandavapura
(9)
Periyapatna
(1)
Petrol Bunk fraud
(1)
PMJAY Scheme
(1)
Sabarimala Ayyappa Temple Crowd
(1)
Sagara
(9)
Sakaleshpura
(3)
Sanchar Saathi App
(1)
Shivamogga
(21)
Shringeri
(1)
Sira
(1)
Somwarpete
(2)
Soraba
(1)
Srirangapatna
(8)
Talakaveri
(1)
Tarikere
(4)
Temple visit
(1)
Thailand offer free domestic flights
(1)
Tips for healthy life style
(1)
Tips for winter season
(1)
Tirthahalli
(6)
Tumkur
(8)
Turuvekere
(2)
Udupi
(1)
Vehicle fitness fees
(1)
volcanic eruption after 12000 years
(1)
Vykunta ekadashi
(1)
Weak password
(1)
Yelandur
(1)

Post a Comment
Post a Comment